ಭೂಮಿ ತಾಯಿ

ಪ್ರತಿ ಸಂಜೆ ಆಕಾಶದ ಒಂದು
ನಕ್ಷತ್ರ ಚಿಮಣಿ ಮಿನುಗಾಗಿ
ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ
ಬೆಳಕು ಹರಡಿ ಮನೆ ತುಂಬ
ಘನಿಕರಿಸಿಕೊಳ್ಳುತ್ತದೆ, ಮುಗಿಲು.

ಅವಳ ಬೆರಳ ಸ್ಪರ್ಶದಲಿ
ಬಳೆಗಳ ಸ್ವರದಲಿ ನೀಲಿ ಹರಡಿ
ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ.
ಏನೂ ಹೇಳಲಾಗದ ಮಾತು ಕಂದನ
ಎಳೆತುಟಿಗಳಲಿ ಅರಳಿ ಜಗದ ಗಂಧ ಸೂಸಿದೆ ಗಾಳಿ.

ಹೂ ಮನಸ್ಸಿನ ಬೆಳಕು ನೀಲಿ ಮುಗಿಲಿಂದ
ಪಡಸಾಲೆ ದಾಟಿ ಬಂದ ಘಳಿಗೆ
ಮೆದುಗಲ್ಲಕೆ ಮುತ್ತುಗಳನ್ನಿತ್ತ ತಾಯಿ
ಚಿರಂತನ ಬೆಳಕು ಕಂಡಳು ಕಂದನ ಕಣ್ಣುಗಳಲಿ
ಭೂಮಿಯೊಳಗೆ ದೇವರು ಇಳಿದ ಕ್ಷಣ ಜೀಕು.

ಸುಮ್ಮನೆ ಎತ್ತಿಕೊಂಡ ಕ್ಷಣ ಬೆಳಕು
ನಕ್ಷತ್ರಗಳು ಕಚಗುಳಿ ಇರಿಸಿದ ಸಮಯ
ಝಲ್ಲೆಂದು ಎದೆ ಕಂಪಿಸಿ ತುಂಬ ಸೊನೆ ಹಾಲು
ಅಪ್ಪಿ ಒಡಲಿಗೇರಿಸಿಕೊಂಡ ಬೆಳಕು ತುಟಿ ಇಟ್ಟು
ಹೀರಿದ ಆಕಾಶ ಭೂಮಿ ಒಂದಾದ ಸುಖದ ಕ್ಷಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆಯ ನೀರು ಪರಿಶುದ್ಧವೆ?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೩

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys